ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಹಾರ್ಮುಜ್ ಜಲಸಂಧಿ ಬುಡಕ್ಕೆ ಬಾಂಬ್ ಇಟ್ಟ ಅಮೆರಿಕ – 5,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಸುರಿಮಳೆ

Posted by Bantwala Isiri News | Mar 18, 2026 | ಬಂಟ್ವಾಳ | 0 |

ಹಾರ್ಮುಜ್ ಜಲಸಂಧಿ ಬುಡಕ್ಕೆ ಬಾಂಬ್ ಇಟ್ಟ ಅಮೆರಿಕ – 5,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಸುರಿಮಳೆ

ಇರಾನ್‌ನ ಕರಾವಳಿಯುದ್ದಕ್ಕೂ ಗುರಿಯಾಗಿಸಿ ಯುಎಸ್ ದಾಳಿ

ಟೆಹ್ರಾನ್: ಇರಾನ್‌-ಇಸ್ರೇಲ್‌, ಅಮೆರಿಕ ಯುದ್ಧ 19ನೇ ದಿನಕ್ಕೆ ಕಾಲಿಟ್ಟಿದೆ. ಇರಾನ್‌ ಹಿಡಿತದಲ್ಲಿದ್ದ ಜಗತ್ತಿನ ಪ್ರಮುಖ ಹಾರ್ಮುಜ್‌ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿದೆ. ಜಲಮಾರ್ಗದ ಬಳಿಕ ಇರಾನಿನ ಕ್ಷಿಪಣಿ ತಾಣಗಳನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ ಸೇನೆ ತಿಳಿಸಿದೆ. ಇದನ್ನೂ ಓದಿ : ಪತಿಯನ್ನ ಅರೆಸ್ಟ್ ಮಾಡಿ ಪತ್ನಿಯನ್ನ ಮಂಚಕ್ಕೆ ಕರೀತಿದ್ದ ಕೇಸ್ – ಇನ್ಸ್‌ಪೆಕ್ಟರ್‌ ಸಂದೇಶ್ ಸಸ್ಪೆಂಡ್

ಹಾರ್ಮುಜ್‌ ಜಲಸಂಧಿ ಬಳಿಯ ಇರಾನ್‌ನ ಕರಾವಳಿಯುದ್ದಕ್ಕೂ ಇದ್ದ ಕ್ಷಿಪಣಿ ತಾಣಗಳ ಮೇಲೆ ಅಮೆರಿಕ 5,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಸುರಿಮಳೆ ಸುರಿಸಿದೆ. ನಿರ್ಣಾಯಕ ಜಲಮಾರ್ಗವನ್ನು ಮತ್ತೆ ತೆರೆಯುವ ಉದ್ದೇಶದಿಂದ ಅಮೆರಿಕ ಶಸ್ತ್ರಗಾರದಲ್ಲಿರುವ ಕೆಲವು ಶಕ್ತಿಶಾಲಿ ಬಾಂಬ್‌ಗಳ ದಾಳಿ ನಡೆಸಿದೆ.

ಈ ತಾಣಗಳಲ್ಲಿರುವ ಇರಾನಿನ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳು ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ಹಡಗು ಸಾಗಣೆಗೆ ಅಪಾಯವನ್ನುಂಟುಮಾಡಿದವು. ಹೀಗಾಗಿ, ಅವುಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧಕ್ಕೆ ಪ್ರತೀಕಾರವಾಗಿ, ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿತ್ತು. ಇದರಿಂದ ಹಲವು ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಶುರುವಾಯಿತು. ಪ್ರಮುಖ ಮಾರ್ಗವನ್ನು ಓಪನ್‌ ಮಾಡುವುದಕ್ಕಾಗಿ ಈ ಬಾಂಬ್ ದಾಳಿ ನಡೆದಿದೆ.

ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತಗೊಳಿಸಲು, ಈ ಪ್ರದೇಶದ ತೈಲ ರಫ್ತಿನ ಮೇಲಿರುವ ದಿಗ್ಬಂಧನ ಸಡಿಲಿಸಲು ಸಹಾಯ ಮಾಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದರು. ಆದರೆ, ನ್ಯಾಟೋ ಸೇರಿದಂತೆ ಅಮೆರಿಕದ ಮಿತ್ರರಾಷ್ಟ್ರಗಳು ಈ ಕರೆಯನ್ನು ತಿರಸ್ಕರಿಸಿದ್ದವು. ಜಗತ್ತು ನಮ್ಮ ಪ್ರಯತ್ನಗಳನ್ನು ಮೆಚ್ಚದಿದ್ದರೂ ಸಹ, ನಾವು ವಿಶ್ವದ ಒಳಿತಿಗಾಗಿ ಯುದ್ಧವನ್ನು ನಡೆಸುತ್ತಿದ್ದೇನೆ ಎಂದು ಟ್ರಂಪ್ ಒತ್ತಿ ಹೇಳಿದರು. ಆ ಬೆನ್ನಲ್ಲೇ ಅಮೆರಿಕ ದಾಳಿ ಮಾಡಿದೆ.

Share:

Rate:

Previousಪತಿಯನ್ನ ಅರೆಸ್ಟ್ ಮಾಡಿ ಪತ್ನಿಯನ್ನ ಮಂಚಕ್ಕೆ ಕರೀತಿದ್ದ ಕೇಸ್ – ಇನ್ಸ್‌ಪೆಕ್ಟರ್‌ ಸಂದೇಶ್ ಸಸ್ಪೆಂಡ್
Nextತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ನೂತನವಾಗಿ ನಿರ್ಮಿಸಲಾದ ಬಾಸ್ಕೆಟ್ ಬಾಲ್ ಅಂಕಣದ ಉದ್ಘಾಟನೆ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ಯೋಗ ರತ್ನ-2024 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿ.ಎಂ.ಸಿದ್ಧರಾಮಯ್ಯ

ಯೋಗ ರತ್ನ-2024 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿ.ಎಂ.ಸಿದ್ಧರಾಮಯ್ಯ

21 June 2024

ಉಡುಪಿ ಪ್ರಾದೇಶಿಕ ವಿಭಾಗದ ವಿಟ್ಲ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಕೋರ್ ಕಮಿಟಿ ಸಭೆ

ಉಡುಪಿ ಪ್ರಾದೇಶಿಕ ವಿಭಾಗದ ವಿಟ್ಲ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಕೋರ್ ಕಮಿಟಿ ಸಭೆ

14 June 2024

ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸಲಿರುವ ವಂದೇ ಭಾರತ್‌ ರೈಲಿಗೆ ಚಾಲನೆ

ಬೆಂಗಳೂರಿನಿಂದ ಬೆಳಗಾವಿಗೆ ಸಂಚರಿಸಲಿರುವ ವಂದೇ ಭಾರತ್‌ ರೈಲಿಗೆ ಚಾಲನೆ

10 August 2025

ಕಾನೂನು ಹೋರಾಟಕ್ಕೆ ತೊಡಕಾಗುವ ಆತಂಕ – ಜೈಲಲ್ಲಿ ಕಿರಿಕ್ ಮಾಡದಂತೆ ದರ್ಶನ್‍ಗೆ ಲಾಯರ್ ಪತ್ರ?

ಕಾನೂನು ಹೋರಾಟಕ್ಕೆ ತೊಡಕಾಗುವ ಆತಂಕ – ಜೈಲಲ್ಲಿ ಕಿರಿಕ್ ಮಾಡದಂತೆ ದರ್ಶನ್‍ಗೆ ಲಾಯರ್ ಪತ್ರ?

17 September 2024

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • Yenepoya Medical College Hospital successfully performs Centrifuge-Based Therapeutic Plasma Exchange (cTPE) for Neuromyelitis Optica (NMO)
    Yenepoya Medical College Hospital successfully performs Centrifuge-Based Therapeutic Plasma Exchange (cTPE) for Neuromyelitis Optica (NMO)
  • ಕೌಟುಂಬಿಕ ಕಲಹ – ಸಬ್ ಇನ್ಸ್‌ಪೆಕ್ಟರ್ ಪತ್ನಿ ನೇಣಿಗೆ ಶರಣು
    ಕೌಟುಂಬಿಕ ಕಲಹ – ಸಬ್ ಇನ್ಸ್‌ಪೆಕ್ಟರ್ ಪತ್ನಿ ನೇಣಿಗೆ ಶರಣು
  • ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಶ್ರೀ ಗುರು ಫ್ರೆಂಡ್ಸ್ ಬೊಂಡಾಲ ಹಮ್ಮಿಕೊಂಡಂತ ಧಾರ್ಮಿಕ ಕಾರ್ಯಕ್ರಮ ಶ್ಲಾಘನೀಯವಾಗಿದ್ದು – ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್
    ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಶ್ರೀ ಗುರು ಫ್ರೆಂಡ್ಸ್ ಬೊಂಡಾಲ ಹಮ್ಮಿಕೊಂಡಂತ ಧಾರ್ಮಿಕ ಕಾರ್ಯಕ್ರಮ ಶ್ಲಾಘನೀಯವಾಗಿದ್ದು – ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್
  • ವಿವಿಧ ದೇಶದ ಭಾರತದ ರಾಯಭಾರಿಗಳು ಸಿ.ಎಂ.ಭೇಟಿ
    ವಿವಿಧ ದೇಶದ ಭಾರತದ ರಾಯಭಾರಿಗಳು ಸಿ.ಎಂ.ಭೇಟಿ
  • ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಡೆನ್ನಾನ-ಡೆನ್ನನ 2026 : ಯುವವಾಹಿನಿ ಕೂಳೂರು ಘಟಕ ಚಾಂಪಿಯನ್
    ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಡೆನ್ನಾನ-ಡೆನ್ನನ 2026 : ಯುವವಾಹಿನಿ ಕೂಳೂರು ಘಟಕ ಚಾಂಪಿಯನ್
  • ಕರಾವಳಿ ಕರ್ನಾಟಕದಲ್ಲಿ ಐತಿಹಾಸಿಕ ಸಾಧನೆ: ಮೊದಲ ಯಶಸ್ವಿ ರೋಬೋಟಿಕ್ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ
    ಕರಾವಳಿ ಕರ್ನಾಟಕದಲ್ಲಿ ಐತಿಹಾಸಿಕ ಸಾಧನೆ: ಮೊದಲ ಯಶಸ್ವಿ ರೋಬೋಟಿಕ್ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ
  • ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು – ಶ್ರೀ ಬಸವೇಶ್ವರ ಜಯಂತಿ ಆಚರಣೆ
    ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು – ಶ್ರೀ ಬಸವೇಶ್ವರ ಜಯಂತಿ ಆಚರಣೆ
  • ಯುವವಾಹಿನಿ ಸಂಸ್ಕೃತಿ ಬೆಳಗಿಸುವ ದಾರಿದೀಪ – ಭುವನೇಶ್ ಪಚ್ಚಿನಡ್ಕ
    ಯುವವಾಹಿನಿ ಸಂಸ್ಕೃತಿ ಬೆಳಗಿಸುವ ದಾರಿದೀಪ – ಭುವನೇಶ್ ಪಚ್ಚಿನಡ್ಕ
  • ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಮನೆ ಮೇಲ್ಚಾವಣಿ ದುರಸ್ತಿ ಶ್ರಮದಾನ
    ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಮನೆ ಮೇಲ್ಚಾವಣಿ ದುರಸ್ತಿ ಶ್ರಮದಾನ
  • ಭಾರತ-ಕೊರಿಯಾ ಗಣರಾಜ್ಯ ಇಂಧನ ಸಂಪನ್ಮೂಲ ಭದ್ರತೆ ಕುರಿತು ಜಂಟಿ ಹೇಳಿಕೆ
    ಭಾರತ-ಕೊರಿಯಾ ಗಣರಾಜ್ಯ ಇಂಧನ ಸಂಪನ್ಮೂಲ ಭದ್ರತೆ ಕುರಿತು ಜಂಟಿ ಹೇಳಿಕೆ

Designed by Elegant Themes | Powered by WordPress

error: Content is protected !!