ಬಂಟ್ವಾಳ ಐಸಿರಿ ನ್ಯೂಸ್
  • ಸುದ್ದಿ
  • ಬಂಟ್ವಾಳ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲೆ

Select Page

ಸೆಕ್ಸ್ ಗೆ ಮಗು ಅಡ್ಡಿ – 1 ವರ್ಷದ ಮಗುವನ್ನ ಕೊಲೆಗೈದ ತಂದೆ; ಸಿಕ್ಕಿಬಿದ್ದಿದ್ದೇ ರೋಚಕ!

Posted by Bantwala Isiri News | Jan 26, 2026 | ಬಂಟ್ವಾಳ | 0 |

ಸೆಕ್ಸ್ ಗೆ ಮಗು ಅಡ್ಡಿ – 1 ವರ್ಷದ ಮಗುವನ್ನ ಕೊಲೆಗೈದ ತಂದೆ; ಸಿಕ್ಕಿಬಿದ್ದಿದ್ದೇ ರೋಚಕ!

– ಪೋಸ್ಟ್ ಮಾರ್ಟಂ ವರದಿಯಲ್ಲಿ ಸಾವಿನ ಅಸಲಿ ರಹಸ್ಯ ಬಯಲು

ತಿರುವನಂತಪುರಂ: ಇತ್ತೀಚೆಗಷ್ಟೇ ತಿರುವನಂತಪುರಂನ ನೆಯ್ಯಟ್ಟಿಂಕರದಲ್ಲಿ (Neyyattinkara) ನಡೆದಿದ್ದ 1 ವರ್ಷದ ಮಗುವಿನ ಸಾವಿನ ಪ್ರಕರಣದಲ್ಲಿ ಸ್ಫೋಟಕ ರಹಸ್ಯ ಬಯಲಾಗಿದೆ. ಸೆಕ್ಸ್‌ ಗೆ ಅಡ್ಡಿಪಡಿಸಿದ್ದಕ್ಕೆ ತಂದೆಯೇ ಮಗುವನ್ನ ಕೊಲೆಗೈದಿರುವುದು ಗೊತ್ತಾಗಿದೆ.

ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ಪತ್ನಿ ಹೇಳಿಕೆ
ಜನವರಿ 16 ರಂದು ಐಕಾರವಿಳಕ್ಕಂನ ಕವಲಕುಲಂನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಶಿಜಿಲ್ ಮತ್ತು ಕೃಷ್ಣಪ್ರಿಯಾ ದಂಪತಿ ತಮ್ಮ 1 ವರ್ಷದ ಮಗು ಇಹಾನ್ (ಅಪ್ಪು) ನನ್ನ ಆಸ್ಪತ್ರೆಗೆ ಕರೆತಂದಿದ್ದರು. ಬಿಸ್ಕೆಟ್‌, ದ್ರಾಕ್ಷಿ ತಿಂದ ಬಳಿಕ ಮಗು (Child) ಕುಸಿದು ಬಿದ್ದಿದೆ ಎಂದು ಇಬ್ಬರೂ ಹೇಳಿದ್ದರು. ಬಳಿಕ ತುರ್ತು ವಿಭಾಗದಲ್ಲಿ ಇಹಾನ್‌ನನ್ನ ಪರೀಕ್ಷಿಸಿದ ವೈದ್ಯರು ಅವನ ಹೊಟ್ಟೆ ಭಾಗದಲ್ಲಿ ಗಾಯವಾಗಿರುವುದನ್ನ ಪತ್ತೆಹಚ್ಚಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಯಿತು. ಪೊಲೀಸರು ತನಿಖೆ

ಪ್ರಾಥಮಿಕ ವಿಚಾರಣೆ ಬಳಿಕ ದಂಪತಿಯನ್ನ ಮನೆಗೆ ಕಳಿಸಿದ್ದ ಪೊಲೀಸರು ಮರಣೋತ್ತರ ಪರೀಕ್ಷಾ ವರದಿ ಹಾಗೂ ಫೊರೆನ್ಸಿಕ್ ರಿಪೋರ್ಟ್ ಬಂದ ಬಳಿಕ ಪುನಃ ವಿಚಾರಣೆಗೆ ಕರೆಸಿದರು. ಈ ಸಂದರ್ಭದಲ್ಲಿ ಪತ್ನಿ ನೀಡಿದ ಹೇಳಿಕೆ ಪ್ರಕರಣಕ್ಕೆ ಟ್ವಿಸ್ಟ್‌ ನೀಡಿತು.

ಹೌದು. 2ನೇ ಬಾರಿಗೆ ವಿಚಾರಣೆಗೆ ಹಾಜರಾದಾಗ, ʻಘಟನೆ ನಡೆದ ದಿನ ರಾತ್ರಿ ಗಂಡ ಹೆಂಡತಿ ಸೆಕ್ಸ್ ವೇಳೆ ಮಗು ಅಳೋಕೆ ಶುರು ಮಾಡಿತು. ಇದರಿಂದ ಸಿಟ್ಟಿಗೆದ್ದ ತಂದೆ ಮಗುವನ್ನ ಮಡಿಲಲ್ಲಿಟ್ಟುಕೊಂಡು ಹೊಟ್ಟೆ, ಎದೆ ಭಾಗಕ್ಕೆ ಕೈಯಲ್ಲಿ ಗುದ್ದಿದ್ದಾನೆ. ಈ ಹಿಂದೆಯೂ ಮಗುವನ್ನ ಜೊತೆಯಲ್ಲಿ ಮಲಗಿಸಿದಾಗ ಬೆಡ್ ಶೀಟ್ ನಿಂದ ಮಗುವಿನ ಮುಖ ಮುಚ್ತಿದ್ದ ಅಂತ ಪತ್ನಿ ಕೃಷ್ಣಪ್ರಿಯಾ ಹೇಳಿದ್ದಳು. ಈ ಬೆನ್ನಲ್ಲೇ ಪೋಸ್ಟ್‌ ಮಾರ್ಟಂ ವರದಿಯಲ್ಲೂ ಮಗು ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿರುವುದು ದೃಢವಾಗಿತ್ತು.

Thiruvananthapuram Crime2

ವರದಿ ಆಧರಿಸಿ ತನಿಖೆ ನಡೆಸಿದಾಗ ತಂದೆ ಶಿಜಿಲ್‌ ಸತ್ಯ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share:

Rate:

Previousಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ರಿಟಿಕಲ್ ಫಂಡ್ ಸಹಾಯಧನ ವಿತರಣೆ
Nextತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ

About The Author

Bantwala Isiri News

Bantwala Isiri News

News Bantwala Isiri News was established on 01 Oct 2023. With a decade of experience in Journalism field, we are providing daily news updates to our readers. News from political corridors, daily events, sports, business, science, technology is published on the website. With an aim to support readers from Karnataka we are providing information about job vacancies in different companies and government departments. WRITE IN BANTWALA ISIRI NEWS Do you have the skill of writing articles, stories, poems, arts? Then we will give an opportunity to publish your writings in Bantwala Isiri News. Send your writings to bantwalaisirinews@gmail.com CONTACT US FOR ADVERTISEMENT Mail us your advertisement, address and phone number to bantwalaisirinews@gmail.com

Related Posts

ಉಡುಪಿ ರಾಜ್ಯ ಮಟ್ಟದ ಕಲಾ ಸಂಭ್ರಮ

ಉಡುಪಿ ರಾಜ್ಯ ಮಟ್ಟದ ಕಲಾ ಸಂಭ್ರಮ

11 February 2024

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕನ್ನಡ ಚಳವಳಿಗಾರರ ಸಮಿತಿ ಆಯೋಜಿಸಿದ್ದ ಜನರಾಜ್ಯೋತ್ಸವ -2025

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕನ್ನಡ ಚಳವಳಿಗಾರರ ಸಮಿತಿ ಆಯೋಜಿಸಿದ್ದ ಜನರಾಜ್ಯೋತ್ಸವ -2025

29 December 2025

ಕುರಿಯಾಳ: ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆ

ಕುರಿಯಾಳ: ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆ

24 July 2024

ಬಾಹ್ಯಾಕಾಶದಲ್ಲಿ ವಿಶ್ವದಾಖಲೆ ನಿರ್ಮಿಸಿ ಭೂಮಿಗೆ ಮರಳಿದ ಸುನಿತಾ

ಬಾಹ್ಯಾಕಾಶದಲ್ಲಿ ವಿಶ್ವದಾಖಲೆ ನಿರ್ಮಿಸಿ ಭೂಮಿಗೆ ಮರಳಿದ ಸುನಿತಾ

19 March 2025

Leave a reply Cancel reply

Your email address will not be published. Required fields are marked *

ಇತ್ತೀಚಿನ ವರದಿಗಳು

  • ಕಡಲ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧ – ಡಿ.ಕೆ.ಶಿವಕುಮಾರ್
    ಕಡಲ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧ – ಡಿ.ಕೆ.ಶಿವಕುಮಾರ್
  • ಬೆಂಗ್ಳೂರಲ್ಲಿ ಪಕ್ಕದ ಮನೆಯವನಿಂದಲೇ ಬಾಲಕನ ಕಿಡ್ನ್ಯಾಪ್‌ ಮಾಡಿ ಹತ್ಯೆ – ಆರೋಪಿ ಅರೆಸ್ಟ್‌
    ಬೆಂಗ್ಳೂರಲ್ಲಿ ಪಕ್ಕದ ಮನೆಯವನಿಂದಲೇ ಬಾಲಕನ ಕಿಡ್ನ್ಯಾಪ್‌ ಮಾಡಿ ಹತ್ಯೆ – ಆರೋಪಿ ಅರೆಸ್ಟ್‌
  • ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ
    ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ
  • ಕಲ್ಯಾಣ ಕರ್ನಾಟಕದ ʻಕಲ್ಯಾಣʼವೇ ನಮ್ಮ ಆದ್ಯತೆ – ಡಿ.ಕೆ. ಶಿವಕುಮಾರ್ 
    ಕಲ್ಯಾಣ ಕರ್ನಾಟಕದ ʻಕಲ್ಯಾಣʼವೇ ನಮ್ಮ ಆದ್ಯತೆ – ಡಿ.ಕೆ. ಶಿವಕುಮಾರ್ 
  • ತೆಂಗಿನ ನಾರು ಉದ್ಯಮವು ಸ್ವಯಂ ಉದ್ಯೋಗ, ಮಹಿಳಾ ಸಬಲೀಕರಣ ಮತ್ತು ಸ್ಥಳೀಯ ಆರ್ಥಿಕ ಬೆಳವಣಿಗೆಗೆ ಪ್ರಮುಖ ಮಾರ್ಗವಾಗಿ ಹೊರಹೊಮ್ಮುತ್ತಿದೆ.
    ತೆಂಗಿನ ನಾರು ಉದ್ಯಮವು ಸ್ವಯಂ ಉದ್ಯೋಗ, ಮಹಿಳಾ ಸಬಲೀಕರಣ ಮತ್ತು ಸ್ಥಳೀಯ ಆರ್ಥಿಕ ಬೆಳವಣಿಗೆಗೆ ಪ್ರಮುಖ ಮಾರ್ಗವಾಗಿ ಹೊರಹೊಮ್ಮುತ್ತಿದೆ.
  • ನ್ಯೂಯಾರ್ಕ್‌ನಲ್ಲಿ ದುರಂತ: ರೈಲು ಹಳಿ ಮೇಲೆ ಕುಳಿತಿದ್ದ ಭಾರತೀಯ ಮೂಲದ ಯುವತಿ, ಸ್ನೇಹಿತ ಸಾವು
    ನ್ಯೂಯಾರ್ಕ್‌ನಲ್ಲಿ ದುರಂತ: ರೈಲು ಹಳಿ ಮೇಲೆ ಕುಳಿತಿದ್ದ ಭಾರತೀಯ ಮೂಲದ ಯುವತಿ, ಸ್ನೇಹಿತ ಸಾವು
  • 70 ಕೋಟಿಗೂ ಅಧಿಕ ಮೌಲ್ಯದ ನಕಲಿ ನಾಣ್ಯ ಜಾಲ ಪತ್ತೆ; ಸಹರನ್‌ಪುರದಲ್ಲಿ ಐವರ ಗ್ಯಾಂಗ್‌ ಬಂಧನ
    70 ಕೋಟಿಗೂ ಅಧಿಕ ಮೌಲ್ಯದ ನಕಲಿ ನಾಣ್ಯ ಜಾಲ ಪತ್ತೆ; ಸಹರನ್‌ಪುರದಲ್ಲಿ ಐವರ ಗ್ಯಾಂಗ್‌ ಬಂಧನ
  • ಬೆಂಗಳೂರಲ್ಲಿ ಮುಂದುವರೆದ ವಲಸಿಗರ ದರ್ಪ – ಪೌರಕಾರ್ಮಿಕನ ಮೇಲೆ ಕೇರಳದ ಯುವತಿಯಿಂದ ಹಲ್ಲೆ॥
    ಬೆಂಗಳೂರಲ್ಲಿ ಮುಂದುವರೆದ ವಲಸಿಗರ ದರ್ಪ – ಪೌರಕಾರ್ಮಿಕನ ಮೇಲೆ ಕೇರಳದ ಯುವತಿಯಿಂದ ಹಲ್ಲೆ॥
  • ಬಳ್ಳಾರಿ ಚಲೋ ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಪ್ರಮುಖರ ಭಾಗಿ
    ಬಳ್ಳಾರಿ ಚಲೋ ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಪ್ರಮುಖರ ಭಾಗಿ
  • ರಷ್ಯಾದಲ್ಲಿ ದೆಹಲಿ ಟೆಕ್ಕಿ ಬಂಧನ; ಪತಿ ಬಿಡುಗಡೆಗಾಗಿ ಮೋದಿಗೆ ವಿಡಿಯೋ ಮೂಲಕ ಪತ್ನಿ ಮನವಿ
    ರಷ್ಯಾದಲ್ಲಿ ದೆಹಲಿ ಟೆಕ್ಕಿ ಬಂಧನ; ಪತಿ ಬಿಡುಗಡೆಗಾಗಿ ಮೋದಿಗೆ ವಿಡಿಯೋ ಮೂಲಕ ಪತ್ನಿ ಮನವಿ

Designed by Elegant Themes | Powered by WordPress

error: Content is protected !!