ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಮೂವಾಜೆಯ ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಯುಕ್ತ ಸ್ಥಳೀಯರು ಶ್ರಮದಾನ ಕಾರ್ಯಕ್ರಮ ನಡೆಸಿದರು. ಊರಿನ ಗ್ರಾಮಸ್ಥರು, ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದ ಸದಸ್ಯರು ಮಕ್ಕಳು ಸೇರಿ ಸುರಿವ ಮಳೆಯಲ್ಲೂ ಶ್ರಮದಾನದ ಸೇವೆ ಮಾಡಿದರು.
ಶ್ರಮ ಸೇವೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಚಹಾ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ಗೋಪಾಲ ಮೇಸ್ತ್ರಿ ಭೀಮಾರ, ಐತ್ತಪ್ಪ ನಾಯ್ಕ್ ಪಡಿಬಾಗಿಲು, ಭಗವತಿ ಸ್ಟೋರ್ ನ ಉದಯ ಪಡಿಬಾಗಿಲು ಅವರು ಮಾಡಿ ಸಹಕರಿಸಿದರು.
