ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.2ರಂದು “ಪೌಷ್ಟಿಕ ಆಹಾರವಸ್ತು ಪ್ರದರ್ಶನ” ನಡೆಯಿತು.

ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಮಕ್ಕಳೊಂದಿಗೆ ಮಾಹಿತಿ ಹಂಚಿಕೊಂಡರು

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಡಾ| ಪ್ರಭಾಕರ್ ಭಟ್‌ ಕಲ್ಲಡ್ಕ ಅವರು ಈ ಪ್ರದರ್ಶನವನ್ನು ಉದ್ಘಾಟಿಸಿ, ಪೌಷ್ಟಿಕ ಆಹಾರವಸ್ತು ಪ್ರದರ್ಶನ ವೀಕ್ಷಿಸಿದರು ಹಾಗೂ ಮಕ್ಕಳಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದರು.

ಡಾ| ಪ್ರಭಾಕರ್ ಭಟ್‌ ಕಲ್ಲಡ್ಕ ಪೌಷ್ಟಿಕ ಆಹಾರವಸ್ತು ಪ್ರದರ್ಶನ ವೀಕ್ಷಿಸಿದರು

ವಿದ್ಯಾರ್ಥಿಗಳು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು.

“ಆಹಾರದ ಘಟಕಗಳು” ಎಂಬ ವಿಜ್ಞಾನ ಪಾಠಕ್ಕೆ ಪೂರಕವಾದ ಪೌಷ್ಟಿಕ ಆಹಾರ ಪ್ರದರ್ಶನ ನಡೆಯಿತು.

6ನೇ ತರಗತಿಯ ವಿದ್ಯಾರ್ಥಿಗಳು ತಾವೇ ಆಹಾರ ವಸ್ತುಗಳನ್ನು ತಂದು ಆಯೋಜಿಸಿದ್ದರು.

ಜೊತೆಗೆ ಮಕ್ಕಳು ಪೋಷಕಾಂಶಯುಕ್ತ ಆಹಾರದ ಸವಿಯನ್ನು ಆಸ್ವಾದಿಸಿದರು. ಸಹಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ ಎಂ., ಪೂರ್ವಗುರುಕುಲದ ಅಧ್ಯಾಪಕರಾದ ರೂಪಕಲಾ ಹಾಗೂ ಅನ್ನಪೂರ್ಣ, ರಾಜೇಶ್ವರಿ, ಜ್ಯೋತಿಶ್ರೀ, ಬಾಲಕೃಷ್ಣ , ವೇದಾವತಿ ಉಪಸ್ಥಿತರಿದ್ದರು.