ಕೇರಳ ರಾಜ್ಯವನ್ನು “ಕೇರಳಂ” ಎಂದು ಮರುನಾಮಕರಣ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಖ್ಯಾತ ಮಲಯಾಳಿ ಸಾಹಿತಿಗಳ ಗುಂಪೊಂದು ಇಂದು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದೆ. ಇದನ್ನೂ ಓದಿ : ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನ ಹಾಗೂ ಸುವರ್ಣ ಮಹೋತ್ಸವ ಸಮಾರಂಭ

ಖ್ಯಾತ ಮಲಯಾಳಿ ಸಾಹಿತಿಗಳನ್ನು ಸ್ವಾಗತಿಸಿದುದು ಅತ್ಯಂತ ಸಂತೋಷಕರ ಮತ್ತು ಅವರೊಂದಿಗಿನ ಸಂವಾದವು ಅತ್ಯಂತ ಒಳನೋಟವುಳ್ಳದ್ದಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಕೇರಳಂ ಮತ್ತು ಮಲಯಾಳಂ ಭಾಷೆಯ ಬಗ್ಗೆ ಸಾಹಿತಿಗಳ ಉತ್ಕಟ ಬದ್ಧತೆಯನ್ನು ಈ ಸಭೆ ಪ್ರತಿಬಿಂಬಿಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್‌ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:

ಕೇರಳ ರಾಜ್ಯವನ್ನು ಕೇರಳಂ ಎಂದು ಮರುನಾಮಕರಣ ಮಾಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ಆಗಮಿಸಿದ ಖ್ಯಾತ ಮಲಯಾಳಿ ಸಾಹಿತಿಗಳ ಗುಂಪನ್ನು ಸ್ವಾಗತಿಸಲು ತುಂಬಾ ಸಂತೋಷವಾಯಿತು.

ಈ ಸಂವಾದವು ಅತ್ಯಂತ ಒಳನೋಟವುಳ್ಳದ್ದಾಗಿತ್ತು ಹಾಗೂ ಇದು ಕೇರಳಂ ಮತ್ತು ಮಲಯಾಳಂ ಬಗ್ಗೆ ಅವರ ಬದ್ಧತೆಯ ಒಲವನ್ನು ಪ್ರತಿಬಿಂಬಿಸಿದೆ.