ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾತಾ ಅಮೃತಾನಂದಮಯಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ದೈವಿಕ ದೇವಾಲಯದಲ್ಲಿ ‘ಶ್ರೀ ರಾಮ ಯಂತ್ರ’ ಪ್ರತಿಷ್ಠಾಪಿಸಲಾಯಿತು. ಅವರು ರಾಮಲಾಲ್ಲಾ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಆರತಿ ಬೆಳಗಿದರು. ಸಮಸ್ತ ಜನರು ಸಂತೋಷ, ಸೌಹಾರ್ದತೆಯಿಂದ ಇರಲೆಂದು ದೇವರಲ್ಲಿ ರಾಷ್ಟ್ರಪತಿ ಪ್ರಾರ್ಥಿಸಿದ್ದಾರೆ.
ದ್ರೌಪದಿ ಮುರ್ಮು ಅವರನ್ನು ಅಯೋಧ್ಯೆಯಲ್ಲಿ ಪಟೇಲ್, ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಅವರು ಬರಮಾಡಿಕೊಂಡರು.
ದೇವಾಲಯ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಮಾತನಾಡಿ, ವೇದ ಗಣಿತವನ್ನು ಆಧರಿಸಿದ ಲೋಹದ ತಟ್ಟೆಯು ಸಕಾರಾತ್ಮಕ ಆಧ್ಯಾತ್ಮಿಕ ಶಕ್ತಿಯನ್ನು ಉತ್ಪಾದಿಸಲು ಮತ್ತು ಭಗವಾನ್ ರಾಮನ ದೈವಿಕ ಉಪಸ್ಥಿತಿಯನ್ನು ಸಂಕೇತಿಸಲು ವಿನ್ಯಾಸಗೊಳಿಸಲಾಗಿದೆ. 150 ಕೆಜಿ ತೂಕದ ಚಿನ್ನದ ಲೇಪಿತ ಚೌಕಾಕಾರದ ಲೋಹದ ತಟ್ಟೆಯು ವೇದ ಮತ್ತು ಮಂತ್ರಗಳ ಕೆತ್ತನೆಯನ್ನು ಒಳಗೊಂಡಿದೆ.
ಇದನ್ನು ಕಾಂಚಿ ಕಾಮಕೋಟಿ ಪೀಠದ ಶ್ರೀ ರಾಮ ಯಂತ್ರದ ಮಾದರಿಯಲ್ಲಿ ರಚಿಸಲಾಗಿದೆ. ಸ್ವಾಮಿ ವಿಜಯೇಂದ್ರ ಸರಸ್ವತಿ ಅವರ ಮಾರ್ಗದರ್ಶನದಲ್ಲಿ ಇದನ್ನು ರಚಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ತಿರುಪತಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಲೋಹದ ತಟ್ಟೆಯನ್ನು ಅಯೋಧ್ಯೆಗೆ ತರಲಾಗಿತ್ತು. ಅಂದಿನಿಂದ ಪ್ರತಿದಿನ ಪೂಜಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
