ಲೇಖಕಿ: ಡಾ. ಅಕ್ಷತ ಕಣಿಯೂರು, ಸಹಪ್ರಾಧ್ಯಾಪಕಿ, ಓರಲ್ಮತ್ತುಮ್ಯಾಕ್ಸಿಲೋಫೇಶಿಯಲ್ಶ ಶಸ್ತ್ರಚಿಕಿತ್ಸಾವಿಭಾಗ, ಯೆನಪೊಯ ಡೆಂಟಲ್ ಕಾಲೇಜು
akshathak@yenepoya.edu.in
ಬಾಯಿಯ ಕ್ಯಾನ್ಸರ್ ಪ್ರ ಪಂಚದಾದ್ಯಂತ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ, ಆದರೆ ಇದು ತಡೆಯ ಬಹುದಾದ ಕ್ಯಾನ್ಸರ್ ರೂ ಪಗಳಲ್ಲಿ ಒಂದಾಗಿದೆ. ಪ್ರಾರಂಭಿಕ ಪತ್ತೆ ಮತ್ತು ತಡೆಗಟ್ಟುವ ಕ್ರಮಗಳ ಮೂಲಕ ಈ ಕಾಯಿಲೆಯ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆರೋಗ್ಯ ತಜ್ಞರು ಜನರಿಗೆ ಅಪಾಯ ಕಾರಕ ಅಂಶಗಳು ಮತ್ತು ಎಚ್ಚರಿಕೆ ಸಂಕೇತಗಳ ಬಗ್ಗೆ ಮಾಹಿತಿ ಹೊಂದಿರಲು ಸಲಹೆ ನೀಡುತ್ತಿದ್ದಾರೆ, ಇದರಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಬಹುದು.
ಪ್ರತಿ ವರ್ಷ ಫೆಬ್ರವರಿ 13 ರಂದು International Oral and Maxillofacial Surgeons Day ದಿನವನ್ನು ಆಚರಿಸಲಾಗುತ್ತದೆ.
ಈ ವರ್ಷದ ಆಚರಣೆಯಲ್ಲಿ ಬಾಯಿಯ ಕ್ಯಾನ್ಸರ್ ತಡೆಗಟ್ಟುವ ಮತ್ತು ಶೀಘ್ರ ಪತ್ತೆ ಹಚ್ಚುವ ವಿಷಯದಲ್ಲಿ ಜನಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇವೆ.
ಬಾಯಿಯ ಕ್ಯಾನ್ಸರ್ ಹೆಚ್ಚಾಗಿ ತುಟಿ, ಜಿಬ್, ನಾಲಿಗೆ, ಬಾಯಿ ಅಡಿ ಭಾಗ,ಕನ್ನಗಳು ಮತ್ತು ಗಂಟಲನ್ನುಪ್ರಭಾವಿಸುತ್ತದೆ. ಪ್ರಮುಖ ಅಪಾಯಕಾರಕ ಅಂಶಗಳಲ್ಲಿ ತಂಬಾಕು ಸೇವನೆ, ಮದ್ಯಪಾನದ ಅತಿಯಾದ ಸೇವನೆ, ಮತ್ತು ಮಾನವ ಪಾಪಿಲೋಮಾವೈರಸ್ (HPV) ಸೋಂಕುಸೇರಿವೆ. ದುರ್ಬಲ ಬಾಯಿಯ ಆರೈಕೆ ಮತ್ತು ಅಪೌಷ್ಟಿಕ ಆಹಾರವೂ ಈ ಕಾಯಿಲೆಗೆ ಕಾರಣವಾಗಬಹುದು.
ಜೀವನ ಶೈಲಿಯ ಬದಲಾವಣೆ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ಬಾಯಿಯ ಕ್ಯಾನ್ಸರ್ ತಡೆಗಟ್ಟುವುದು ಅವಶ್ಯಕ. ಧೂಮಪಾನ ಮತ್ತು ಮದ್ಯಪಾನದ ಸೇವನೆಯನ್ನು ಕಡಿಮೆ ಮಾಡುವ ಮಹತ್ವವನ್ನು ಒತ್ತಿಹೇಳಿದಷ್ಟು ಕಡಿಮೆ. ಹಣ್ಣು-ತರಕಾರಿಗಳ ಸಮತೋಲನಿತ ಆಹಾರವು ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಸುರಕ್ಷಿತ ಬಾಯಿಯ ಅಭ್ಯಾಸಗಳನ್ನುಅನುಸರಿಸುವುದು ಸಹ ಸೂಕ್ತವಾಗಿದೆ.
ಬಾಯಿಯ ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಲು ಪ್ರಾರಂಭಿಕ ಪತ್ತೆಯು ಅತ್ಯವಶ್ಯಕ. ನಿರಂತರ ಬಾಯಿಯ ಹುಣ್ಣುಗಳು, ನಿರ್ದಿಷ್ಟ ಕಾರಣವಿಲ್ಲದ ರಕ್ತಸ್ರಾವ, ಹಲ್ಲುಗಳು ಅತಿಯಾಗಿ ಆಡುವುದು,ನಾಲಿಗೆ ಚಲನೆಗೆತಡೆ, ನುಂಗುವಲ್ಲಿ ತೊಂದರೆ, ಬಾಯಿಯಲ್ಲಿ ಗುಡ್ಡೆ ಇರುವುದು, ದವಡೆಯಲ್ಲಿ ಮರಗಟ್ಟುವ ಭಾವನೆ, ಧ್ವನಿಬದಲಾವಣೆ,ಮತ್ತು ಕಾರಣವಿಲ್ಲದ ತೂಕ ಇಳಿಕೆ ಮುಂತಾದ ಲಕ್ಷಣಗಳನ್ನುನಿರ್ಲಕ್ಷಿಸಬಾರದು. ನಿಯಮಿತ ದಂತ ಪರೀಕ್ಷೆಗಳು ಮುಖ್ಯ ಪಾತ್ರವಹಿಸುತ್ತವೆ.
ಏಕೆಂದರೆ ದಂತ ವೈದ್ಯರು ಯಾವುದೇ ಅಸಾಮಾನ್ಯ ಬದಲಾವಣೆಗಳನ್ನು ಪ್ರಾರಂಭದಲ್ಲೇ ಗುರುತಿಸಬಲ್ಲರು. ಯಾವುದೇ ಅನುಮಾನ ಇದ್ದರೆ ಅವರು ನಿಮ್ಮನ್ನು ಓರಲ್ಮತ್ತುಮ್ಯಾಕ್ಸಿಲೋಫೇಶಿಯಲ್ಶಸ್ತ್ರಚಿಕಿತ್ಸಕರಿಗೆ ರೆಫರ್ಮಾಡುತ್ತಾರೆ.
ಬಾಯಿಯ ಕ್ಯಾನ್ಸರ್ ಪತ್ತೆ ಯಾಗದೇ ಉಳಿದರೆ ಪ್ರಾಣಾಪಾಯಕರವಾಗಬಹುದು. ಆದರೆ ಎಚ್ಚರಿಕೆಯಿಂದ, ನಿಯಮಿತ ತಪಾಸಣೆಗಳ ಮೂಲಕ ಮತ್ತು ಆರೋಗ್ಯಕರ ಜೀವನಶೈಲಿಯ ಅನುಸರಣೆಯ ಮೂಲಕ, ವ್ಯಕ್ತಿಗಳು ತಮ್ಮಆರೋಗ್ಯವನ್ನು ಕಾಯ್ದುಕೊಳ್ಳಲು ಮತ್ತು ಅಪಾಯವನ್ನು ಕಡಿಮೆಮಾಡಿಕೊಳ್ಳಲು ಸಾಧ್ಯ. ನೀವು ಯಾವುದೇ ಲಕ್ಷಣಗಳನ್ನು ಅನುಭವಿಸಿದರೆ ತಕ್ಷಣವೇ ಓರಲ್ಮತ್ತುಮ್ಯಾಕ್ಸಿಲೋಫೇಶಿಯಲ್ಶಸ್ತ್ರಚಿಕಿತ್ಸಕರಿಗೆ ಸಂಪರ್ಕಿಸಿ—ಶೀಘ್ರಕ್ರಮ ನಿಮ್ಮ ಪ್ರಾಣವನ್ನುಉಳಿಸಬಹುದು.
ಯಾವುದೇ ಪ್ರಶ್ನೆಗಳಿಗಾಗಿ ಸಂಪರ್ಕಿಸಿ: ಡಾ. ಜಗದೀಶ್ಚಂದ್ರ, ವಿಭಾಗಮುಖ್ಯಸ್ಥರು,ಓರಲ್ಮತ್ತುಮ್ಯಾಕ್ಸಿಲೋಫೇಶಿಯಲ್ಶಸ್ತ್ರಚಿಕಿತ್ಸಾವಿಭಾಗ, ಯೆನಪೊಯ ಡೆಂಟಲ್ ಕಾಲೇಜು
jagadishchandra@yenepoya.edu.in