ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಜೆ ಶ್ರೀರಾಮ ಭಜನಾ ಮಂದಿರ ಇದರ ಸಹಯೋಗದಲ್ಲಿ ವಿಶ್ವ ಪರಿಸರ ದಿನ ವನ್ನುಕಜೆ ಶ್ರೀರಾಮ ಭಜನಾ ಮಂದಿರ ವಠಾರದಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿಗಳ ಜೊತೆ ಸೇರಿಜೊತೆಗೆ ವಿಶೇಷವಾಗಿ ಜೂನ್ ತಿಂಗಳ ಹುಟ್ಟುಹಬ್ಬ ಆಚರಿಸುತ್ತಿರುವ ವಿದ್ಯಾರ್ಥಿಗಳು ಹಾಗೂ “ಅವನಿ” ವಿಜ್ಞಾನ ಸಂಘದ ವತಿಯಿಂದ ಗಿಡಗಳನ್ನು ನೆಡುವ ಮೂಲಕ ಆಚರಿಸಿದರು. ಇದನ್ನೂ ಓದಿ :ಸ್ನಾತಕೋತ್ತರ ಮಹಿಳೆಯರ ವಿದ್ಯಾರ್ಥಿ ನಿಲಯಕ್ಕೆ ಅಧಿಕಾರಿಗಳೊಂದಿಗೆ ಗೃಹ ಸಚಿವ  ಡಾ| ಜಿ.ಪರಮೇಶ್ವರ್‌ ಭೇಟಿ

ಕಾರ್ಯಕ್ರಮದಲ್ಲಿ ಬಂಟ್ವಾಳ ವಲಯಅರಣ್ಯಾಧಿಕಾರಿ ಸುನಿಲ್ ಡಿ ಸೋಜಾ, ಗಸ್ತು ಅರಣ್ಯಾಧಿಕಾರಿರಾಘವೇಂದ್ರ, ಉಪವಲಯಅರಣ್ಯಾಧಿಕಾರಿ ರವಿರಾಜ್ , ಕಜೆ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಶಿವರಾಮ್ ರೈ ಮೇರಾವು, ಪ್ರಮುಖರಾದ ಗಿರಿಯಪ್ಪಗೌಡ ಪಂಜಾಲು, ಜಯಪ್ರಕಾಶ್‌ ರೈ, ಪುರುಷೋತ್ತಮ ಪೂಜಾರಿ ಪಡೀಲ್ , ಶಂಕರ ನಾಯ್ಕ ನಿರ್ಭೈ ಲು , ಹರೀಶ್‌ಕಜೆ, ಸತೀಶ್, ಪುಷ್ಪರಾಜ್ , ರಮೇಶ್, ಗಣೇಶ್ , ಶ್ರೀಮತಿ ರಂಜನಿ , ಸುಮಿತ್ರ, ಶಶಿಕಲಾ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು, ಸಹ ಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ, ವಿಜ್ಞಾನ ಅಧ್ಯಾಪಕರಾದ ಜ್ಯೋತಿಶ್ರೀ, ಬಾಲಕೃಷ್ಣ, ಗುಣಶ್ರೀ, ವಾಣಿಶ್ರೀ ಉಪಸ್ಥಿತರಿದ್ದರು. ಸಂಸ್ಕೃತ  ಅಧ್ಯಾಪಕರಾದ ಶ್ರೀಮತಿ ಅನ್ನಪೂರ್ಣ ಪರಿಸರ ದಿನದ ಮಹತ್ವವನ್ನು ತಿಳಿಸಿದರು. ಇದನ್ನೂ ಓದಿ :ಭಾರತದ ಜನಸಂಖ್ಯೆ 146 ಕೋಟಿ – ಮಹಿಳೆಯರಲ್ಲಿ ಕುಸಿಯುತ್ತಿದೆ ಸಂತಾನೋತ್ಪತ್ತಿ