‘ಹಸಿರೇ ಉಸಿರು’ ಎಂಬ ನಾಣ್ಣುಡಿಯಂತೆ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ, ಬಂಟ್ವಾಳ ಇಲ್ಲಿ ಜು. 7 ರಂದು ಗಿಡವನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀಯುತ ವಿಕಾಸ್ ಶೆಟ್ಟಿ ಕೆ. ಉಪವಲಯ ಅರಣ್ಯಾಧಿಕಾರಿಗಳು ಬಂಟ್ವಾಳ ಅವರು ಭಾಗವಹಿಸಿದರು. ಇದನ್ನೂ ಓದಿ : ಕುಜ್ಲುಬೆಟ್ಟು ಶಾಲೆ : ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ
ಪರಿಸರವನ್ನು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎನ್ನುತ್ತ ಪರಿಸರ ಸಂರಕ್ಷಣೆ, ಆಚರಣೆಯ ಮಹತ್ವ, ಮುಖ್ಯ ಉದ್ಧೇಶದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಶ್ರೀಮತಿ ಸ್ಮಿತಾ ಗಸ್ತು ಅರಣ್ಯಪಾಲಕರು ಬಂಟ್ವಾಳ ಶಾಖೆ ಅವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಶ್ರೀಯುತ ಹರಿಪ್ರಸಾದ್‌ ರವರು‘ ಇರುವುದೊಂದೆ ಭೂಮಿ’ಅದರ ರಕ್ಷಣೆಯ ಹೊಣೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಎಂದು ನುಡಿದರು.
ವಿದ್ಯಾರ್ಥಿಗಳಿಂದ ವಿವಿಧ ಪ್ರಕೃತಿಗೀತೆ, ಪರಿಸರ ಸಂಬಂಧಿ ನೃತ್ಯ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿ ಸಂಘಂದ ಸದಸ್ಯರು, ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದರು. ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿಯಾದ ಶ್ರೀಮತಿ ವೀಣಾದೇವಾಡಿಗ, ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ರವಣ್‌ ಸ್ವಾಗತಿಸಿದರು,  ಹನ್ಸಿಕಾ ಎಸ್. ವಂದಿಸಿದರು.