ಬೆಳ್ತಂಗಡಿ: ನಟ ಯಶ್‌ ಅವರು ಬೆಳ್ತಂಗಡಿ ತಾಲೂಕಿನಲ್ಲಿರುವ ಉಜಿರೆಯ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು.

ಉಜಿರೆಯ ಸುರ್ಯ ದೇವಸ್ಥಾನ ಮತ್ತು ಧರ್ಮಸ್ಥಳಕ್ಕೆ ಇಂದು ರಾಧಿಕಾ, ಯಶ್‌ ಭೇಟಿ

ಇಂದು ಬೆಳಗ್ಗೆ ನಟಿ ರಾಧಿಕಾ, ಮಕ್ಕಳ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ಕುಟುಂಬದ ಮಣ್ಣಿನ ಮೂರ್ತಿ ಮತ್ತು ಮಣ್ಣಿನ ಫಿಲ್ಮ್ ರೀಲ್‌ ಹರಕೆಯನ್ನು ಯಶ್‌ ತೀರಿಸಿದರು.

ಈ ಭೇಟಿಯ ವೇಳೆ ಟಾಕ್ಸಿಕ್ ಚಲನಚಿತ್ರದ ನಿರ್ಮಾಪಕ ವೆಂಕಟ್‌ ಅವರು ಸಾಥ್ ನೀಡಿದರು.

ಸುರ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಯಶ್‌ ಅವರು ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು.