ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯ ತುಂಬೆ ವಲಯದ ನರಿಕೊಂಬು ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಸಭಾಭವನದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಅನುದಾನ ಚೆಕ್ಕನ್ನು ವೀರಮಾರುತಿ ವ್ಯಾಯಾಮ ಶಾಲೆಯ ಸಮಿತಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ತುಂಬೆ ವಲಯ ಮೇಲ್ವಿಚಾರಕಿ ಮಮತಾ, ವೀರಮಾರುತಿ ಮಂದಿರದ ಅಧ್ಯಕ್ಷರಾದ ಚಂದ್ರಹಾಸ ಕೊಡಿಮಜಲು, ನರಿಕೊಂಬು ಬಿ. ಒಕ್ಕೂಟದ ಅಧ್ಯಕ್ಷ ಜಯಂತ, ಸದಸ್ಯರಾದ ಸುಬ್ಬಣ್ಣ ನಾಯ್ಕ , ನರಿಕೊಂಬು ಎ. ಒಕ್ಕೂಟದ ಉಪಾಧ್ಯಕ್ಷೆ ಗುಲಾಬಿ, ಸೇವಾ ಪ್ರತಿನಿಧಿಗಳಾದ ಕುಸುಮಾವತಿ, ಪ್ರತಿಭಾ. ವೀರಮಾರುತಿ ಮಂದಿರದ ಪದಾಧಿಕಾರಿಗಳಾದ ಯೋಗೀಶ್ ಮಾರುತಿ ನಗರ, ಪ್ರಕಾಶ್ ಕೋಡಿ ಮಜಲು, ವೀರಮಾರುತಿ ಮಹಿಳಾ ಮಂಡಳಿಯ ಸದಸ್ಯರಾದ ಸಂಧ್ಯಾ, ಕವಿತಾ, ಗಿರಿಜಾ ,ಜಾನಕಿ, ಮಂಜುಳ, ಲತಾ ,ವನಿಲ ಉಪಸ್ಥಿತರಿದ್ದರು.