ಮಂಗಳೂರಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ತುಂಬೆ ಸಮೀಪದ ಕಡೆಗೋಳಿಯಲ್ಲಿ ಇಂದು ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡ ಬಿದ್ದಿದೆ.

ಟ್ಯಾಂಕರ್ ತುಂಬಾ ಅನಿಲ ತುಂಬಿದ್ದರೂ ಯಾವುದೇ ಸೋರಿಕೆ, ಹಾನಿಯಾಗದೆ ಭಾರಿ ಅಪಾಯ ತಪ್ಪಿದೆ. ಇದೀಗ ಟ್ಯಾಂಕರ್ ತೆರವು ಕಾರ್ಯ ನಡೆದಿದ್ದು. ವಾಹನ ಸಂಚಾರಕ್ಕೆ ಯಾವುದೇ ಆಡ್ಡಿಯಾಗಿಲ್ಲ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಸ್ಥಳೀಯರು ಆಗಮಿಸಿ ತೆರವಿಗೆ ಸಹಕರಿಸಿದರು.
