ಕಲ್ಲಡ್ಕ : ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾ ಶಿವ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ರೂ ಒಂದು ಲಕ್ಷದ 50 ಸಾವಿರ ಅನುದಾನ ಮಂಜೂರಾಗಿದ್ದು, ಅನುದಾನದ ಡಿ ಡಿ ಯನ್ನು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಗೆ ಮಾರ್ಚ್ 5 ಗುರುವಾರ ಹಸ್ತಾಂತರ ಮಾಡಲಾಯಿತು. ಇದನ್ನೂ ಓದಿ : ಶ್ರೀ ಕನಪಾಡಿ ದೈವಸ್ಥಾನದ ಭಂಡಾರ ಹೋಗುವ ದರಿಬಾಗಿಲು-ಪಲ್ಕೆ ಕಾಂಕ್ರಿಟ್ ರಸ್ತೆ ಉದ್ಘಾಟನೆ
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಏ ರುಕ್ಮಯ ಪೂಜಾರಿ ಏಳ್ತೀಮಾರು, ಸದಸ್ಯರಾದ ವೀರಪ್ಪ ಮೂಲ್ಯ, ಉಮಶಿವ ಕ್ಷೇತ್ರ ದೇವಸ್ಥಾನದ ಅಧ್ಯಕ್ಷ ಈಶ್ವರ ಭಟ್ ರಾಕೋಡಿ, ಕಾರ್ಯದರ್ಶಿ ಶ್ಯಾಮ್ ಭಟ್, ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಯೋಜನಾಧಿಕಾರಿ ಸುರೇಶ ಗೌಡ, ಕಲ್ಲಡ್ಕ ವಲಯ
ಮೇಲ್ವಿಚಾರಕ ಶುಕರಾಜ್,ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾಧವ ಸಾಲ್ಯಾನ್ ಕುದ್ರೆಬೆಟ್ಟು, ಸದಸ್ಯರಾದ ಗಣೇಶ್ ನಾಯ್ಕ, ಚಿನ್ನಾ ಕಲ್ಲಡ್ಕ, ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಕಲ್ಲಡ್ಕ ಅಧ್ಯಕ್ಷ ಯತೀನ್ ಏಳ್ತೀಮಾರ್, ಗ್ರಾಮಾಭಿವೃದ್ಧಿ ಯೋಜನೆಯ ಬಾಳ್ತಿಲ ಒಕ್ಕೂಟದ ಅಧ್ಯಕ್ಷೆ ಉಮಾವತಿ, ಗೋಳ್ತಮಜಲು ಸಿ ಒಕ್ಕೂಟದ ಮಾಜಿ ಅಧ್ಯಕ್ಷ ಶೇಖರ ಪೂಜಾರಿ, ಒಕ್ಕೂಟದ ಪದಾದಿಕಾರಿ ನೇತ್ರವತಿ,ಕಲ್ಲಡ್ಕ ಒಕ್ಕೂಟದ ಉಪಾಧ್ಯಕ್ಷೆ ಉಷಾ, ಮಾಜಿ ಉಪಾಧ್ಯಕ್ಷೆ ಅರುಣಾಕ್ಷಿ, ಗೋಳ್ತಮಜಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲೀಲಾವತಿ , ಒಕ್ಕೂಟಗಳ ಸೇವಾ ಪ್ರತಿನಿಧಿಗಳಾದ ವಿದ್ಯಾ, ಅಶ್ವಿನಿ, ಉಮಶಿವ ಕ್ಷೇತ್ರ ದೇವಸ್ಥಾನದ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
