ಬಂಟ್ವಾಳ ರಫುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ವಿದ್ಯಾಗಿರಿ ಇಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಪ್ರಯುಕ್ತ ಅರಿವು-ಜಾಗೃತಿ –ಮಾಹಿತಿ ಕಾರ್ಯಕ್ರಮ ಜೂ.14ರಂದು ನಡೆಸಲಾಯಿತು.
ಶಿಕ್ಷಕಿ ಶುಭಲತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅರಿವು-ಜಾಗೃತಿ ಕುರಿತಾದ ಸುಭಾಷಿತ, ರಸಪ್ರಶ್ನೆ ಮತ್ತು ಭಾಷಣಗಳನ್ನು ಪ್ರದರ್ಶಿಸಿದರು.
ಬಾಲ್ಯದಲ್ಲೇ ದುಡಿಮೆಯ ಹೊರೆಯಿಂದ ತಮ್ಮ ಭವಿಷ್ಯವನ್ನು ಕತ್ತಲಾಗಿಸುವ ಕಥೆಯನ್ನು ಸಾರುವ ನೃತ್ಯ ರೂಪಕ ಮತ್ತು ಬಾಲ್ಯದ ಕನಸನ್ನು ಚಿವುಟದಿರಿ, ದುಡಿಮೆ ಬೇಡ, ಶಿಕ್ಷಣ ನೀಡಿ ಎಂಬ ಘೋಷಣಾ ವಾಕ್ಯಗಳ ಫಲಕಗಳನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಪಾಂಶುಪಾಲೆ ಜೂಲಿ ಟಿ. ಜೆ, ಉಪಪ್ರಾಂಶುಪಾಲೆ ಪೂರ್ಣೇಶ್ವರಿ ಭಟ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಅಮಿತ್ ಕುಮಾರ್ ಸ್ವಾಗತಿಸಿ, ನಿರ್ವಹಿಸಿದರು.