ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ತುಂಬೆ ವಲಯದ ತುಂಬೆ ಬೋಲ್ಲಾರಿ ನಿವಾಸಿಯಾದ ಶ್ರೀಮತಿ ಅವ್ವಮ್ಮ ಇವರ ಅನಾರೋಗ್ಯದ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 20,000 ರೂ. ಕ್ರಿಟಿಕಲ್ ಫಂಡ್ ಸಹಾಯಧನ ಮಂಜೂರಾಗಿದ್ದು ಈ ಮೊತ್ತವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಪ್ರಾದೇಶಿಕ ಕಚೇರಿಯ ಸ್ವ ಸಹಾಯ ಸಂಘಗಳ ಆಂತರಿಕ ಲೆಕ್ಕ ಪರಿಶೋಧನೆ ವಿಭಾಗದ ಯೋಜನಾಧಿಕಾರಿ ಶ್ರೀಮತಿ ರೂಪಾ ಜೈನ್ ಇವರು ವಿತರಿಸಿದರು.
ಈ ಸಂದರ್ಭ ಬಂಟ್ವಾಳ ತಾಲೂಕಿನ ಆಂತರಿಕ ಲೆಕ್ಕ ಪರಿಶೋಧಕರಾದ ರಾಜೇಶ್, ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ಸುಜೀರ್ ವಿಭಾಗದ ಸೇವಾ ಪ್ರತಿನಿಧಿ ಮಲ್ಲಿಕಾ ,ಒಕ್ಕೂಟದ ಪದಾಧಿಕಾರಿಯಾದ ನೌಜಿಯ, ನಿಸರ್ಗ ಸಂಘದ ಸದಸ್ಯರಾದ ಬಿ ಫಾತಿಮಾ ಹಾಗೂ ಮೈಮುನ ಉಪಸ್ಥಿತರಿದ್ದರು.