ಯು.ಎಸ್. ಓಪನ್ ಸೂಪರ್-300 ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೆನಡಾದ ಬ್ರಿಯಾನ್ ಯಾಂಗ್ ಅವರನ್ನು ಮಣಿಸುವ ಮೂಲಕ ಪ್ರಶಸ್ತಿ ಜಯಿಸಿರುವ ಭಾರತೀಯ ಯುವ ಶಟ್ಲರ್ ಆಯುಷ್ ಶೆಟ್ಟಿ ಅವರನ್ನು ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯ    ಅಭಿನಂದಿಸಿದರು.  ಇದನ್ನೂ ಓದಿ : “ನಿಜ ಸುದ್ದಿಗಾಗಿ ಸಮರ” ಸಂವಾದವನ್ನು ಉದ್ಘಾಟಿಸಿದ ಸಿ.ಎಂ. – ಸಿದ್ಧರಾಮಯ್ಯ
ವೃತ್ತಿ ಜೀವನದ ಮೊದಲ ಸೂಪರ್-300 ಟೂರ್ನಿಯಲ್ಲೇ ಪ್ರಶಸ್ತಿ ಗೆದ್ದಿರುವ ಈ ಯುವ ಪ್ರತಿಭೆ ಕರ್ನಾಟಕದವನು ಎನ್ನುವುದು ಮತ್ತಷ್ಟು ಖುಷಿ ಹಾಗೂ ಹೆಮ್ಮೆಯ ವಿಚಾರ. ಇವರ ಕ್ರೀಡಾ ಬದುಕು ಇನ್ನಷ್ಟು ಪ್ರಶಸ್ತಿ, ಪುರಸ್ಕಾರಗಳಿಂದ ಕೂಡಿರಲಿ, ಮುಂದೆಯೂ ದೇಶದ ಹಿರಿಮೆಯನ್ನು ಹೆಚ್ಚಿಸಲಿ ಎಂದು ಹಾರೈಸಿದರು.  ಇದನ್ನೂ ಓದಿ : ಕಾವೇರಿ ನದಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಸಿ.ಎಂ. -ಸಿದ್ಧರಾಮಯ್ಯ