ಬಂಟ್ವಾಳ :     ಕೇಂದ್ರ ಸರಕಾರದ ಅಟಲ್ ಟಿಂಕರಿಂಗ್ ಲ್ಯಾಬ್‌ನ ಎನರ್ಜಿ ಕ್ಲಬ್ ಇದರ ಅನ್ಲೈನ್  ಕಾರ್ಯಕ್ರಮವು ಜು. 26 ರಂದು ಶ್ರೀವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆವಿದ್ಯಾಗಿರಿ, ಬಂಟ್ವಾಳ ಇಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ವಿಶ್ವ ಜಾಗತಿಕ ತಾಪಮಾನ ಹೆಚ್ಚಳ ಅದರ ಕಾರಣ ಮತ್ತು ಪರಿಣಾಮಗಳು, ಪರಿಸರ ಮಾಲಿನ್ಯದ ಕಾರಣ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಇದನ್ನೂ ಓದಿ : ಕೆ.ಡಿ.ಪಿ.ಸಭೆ : 50℅ ಮಹಿಳೆಯರು ಹೆರಿಗೆಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಬರುತ್ತಾರೆ – ರಾಜೇಶ್ ನಾಯ್ಕ್

ಎನರ್ಜಿ ಕ್ಲಬ್‌ನ ಮೂವತ್ತು ವಿದ್ಯಾರ್ಥಿಗಳು ಭಾಗವಹಿದರು. ಕ್ಲಬ್‌ನ ನಿರ್ದೇಶಕಿ ಕುಮಾರಿ ರಶ್ಮಿತಾರವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಶಾಲಾ ವಿಜ್ಞಾನ ವಿಷಯದ ಶಿಕ್ಷಕಿಯರಾದ ಶ್ರೀಮತಿ ಭವ್ಯ ಜೆ. ಹಾಗೂ ಕುಮಾರಿ ಸೌಜನ್ಯ ಉಪಸ್ಥಿತರಿದ್ದರು.  ಇದನ್ನೂ ಓದಿ : ಬಂಟ್ವಾಳ : ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸವಾರ ಸ್ಥಳದಲ್ಲಿಯೇ ಸಾವು