ಬಂಟ್ವಾಳ:ವಿದ್ಯಾವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರದೊಡ್ಡದಿದೆ. ಗುರುವಿನ ಮಾರ್ಗದರ್ಶನವಿಲ್ಲದೇ ಯಶಸ್ವಿಯಾಗಲು ಸಾಧ್ಯವಿಲ್ಲ. ಸಮಾಜದ ಯಾವುದೇ ವೃತ್ತಿಯಲ್ಲಿರುವವರೂ ಕೂಡ ಶಿಕ್ಷಕರ ಸಹಕಾರದಿಂದ ಬಂದವರಾಗಿದ್ದಾರೆಎಂದು ಶ್ರೀ ವೆಂಕಟರಮಣ ಸ್ವಾಮೀ ಪದವಿ ಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ.ಮಂಚಿ ನುಡಿದರು. ಇದನ್ನೂ ಓದಿ : ಕಿಚ್ಚ ಸುದೀಪ್ ಕೇರ್ ಫೌಂಡೇಶನ್‌ ಮೂಲಕ ಪ್ರಿಯಾ ಸುದೀಪ್‌ ಅವರು ಅಂಗ ಮತ್ತು ಅಂಗಾಂಶ ದಾನ
ಅವರು ಶ್ರೀ ವೆಂಕಟರಮಣ ಸ್ವಾಮೀ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಎಸ್.ವಿ.ಎಸ್.ಪಿ.ಯುಕಾಲೇಜಿನ ಪ್ರಾಂಶುಪಾಲ ಶ್ರೀ ಸುದರ್ಶನ್ ಬಿ., ಉಪನ್ಯಾಸಕರಾದ ಶ್ರೀಮತಿ ಅಖಿಲಾ ಪೈ, ಶಶಿಧರ್, ಡಾ.ಕಾಶೀನಾಥ ಶಾಸ್ತಿç ಹೆಚ್.ವಿ. ಇದ್ದರು.ವಿದ್ಯಾರ್ಥಿಗಳಾದ ಪ್ರಜ್ವಲ್ ಪ್ರಭು ಸ್ವಾಗತಿಸಿ, ಕು.ಪ್ರತೀಕತಂಡದವರು ಪ್ರಾರ್ಥಿಸಿದರು. ರಕ್ಷಿತ್‌ಆರ್ ಶೆಟ್ಟಿನಿರೂಪಿಸಿ, ಶಾರದಾ ಶಿವಪ್ಪ ಮಾದರವಂದಿಸಿದರು. ಇದನ್ನೂ ಓದಿ :  ಎಫ್ ಪಿಒ ನಿರ್ವಹಣೆ ಮಾಹಿತಿ ಕಾರ್ಯಾಗಾರ
ಕಾರ್ಯಕ್ರಮದಕೊನೆಯಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನೇರ್ಪಡಿಸಲಾಗಿತ್ತು.