ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ 1ರಿಂದ 7ನೇ ತರಗತಿಯ ಪೋಷಕರ ಸಭೆ ನಡೆಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್‌ ಕಲ್ಲಡ್ಕ“ನಮ್ಮಜೀವನದ ಶೈಲಿ ಚೆನ್ನಾಗಿರಬೇಕು.ಇಡೀರಾಜ್ಯದಲ್ಲಿ ಶ್ರೀರಾಮದ ಮಕ್ಕಳು ಎಂಬ ಹೆಮ್ಮೆಯಿದೆ.ಮಕ್ಕಳ ಹಿತದೃಷ್ಟಿಯಿಂದಮಕ್ಕಳ ದಿಕ್ಕಿನಲ್ಲಿ ಯೋಚನೆ ಮಾಡಿ. ಮಕ್ಕಳ ವೈಯಕ್ತಿಕ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ. ಪೋಷಕರು ಮೊಬೈಲ್ ಬಳಕೆ ಕಡಿಮೆ ಮಾಡಿ, ಮಕ್ಕಳು ಮೊಬೈಲ್ ಮತ್ತು ಟಿವಿ ಬಳಸದ ಹಾಗೇ ಎಚ್ಚರವಹಿಸಿ.ಮಕ್ಕಳ ಶಾಲೆಯಚಟುವಟಿಕೆಯ ಬಗ್ಗೆ ಗಮನಿಸಿ. ಪೋಷಕರು ಶಾಲೆಯ ಜೊತೆ ವಿಶೇಷ ಸಂಪರ್ಕವನ್ನು ಹೊಂದಿರಬೇಕು. ಹೆಚ್ಚು ಹೆಚ್ಚು ಸ್ವದೇಶಿ ವಸ್ತುಗಳನ್ನು ಬಳಸಿ” ಎಂದುಶಿಕ್ಷಕರು ಮತ್ತು ಪೋಷಕರಜವಾಬ್ದಾರಿಯನ್ನು ತಿಳಿಸಿದರು.
ಕಾರ್ಯಕ್ರಮದ ಮೋದಲಿಗೆ ವಿದ್ಯಾರ್ಥಿಗಳಿಂದ ಪೋಷಕರಿಗೆ ರಕ್ಷೆಧಾರಣೆ ನಡೆಯಿತು.
ನಂತರ ಶಿಕ್ಷಣ ಜೊತೆಯಲ್ಲಿ ಸಂಸ್ಕಾರವು ಸಿಗುತ್ತಿದೆ.ಮಕ್ಕಳ ಚಲನ ವಲನವನ್ನು ಶಿಕ್ಷಕರು ಗಮನಿಸುತ್ತಾರೆ.ಮಕ್ಕಳು ಭಜನೆಯಜೊತೆ ಶ್ಲೋಕವನ್ನು ಹೇಳುತ್ತಾರೆ.ಕನ್ನಡ ಭಾಷೆಯ ಬಗ್ಗೆ ಅಭಿಮಾನವಿದೆ.ಶಾಲೆಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಮಕ್ಕಳು ತುಂಬಾ ಇಷ್ಟ ಪಡುತ್ತಾರೆ“ ಎಂದು ಪೋಷಕರುಆಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು ನಾರಾಯಣ ಸೋಮಯಾಜಿ, ಸಂಚಾಲಕರು ವಸಂತ ಮಾಧವ, ಸಹಸಂಚಾಲಕ ರಮೇಶ್, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯೆ ಮಲ್ಲಿಕಾಆರ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು.
ಸಹಮುಖ್ಯೋಪಾಧ್ಯಾಯರಾದ ಸುಮಂತ್‌ಎಮ್ ಆಳ್ವಸ್ವಾಗತಿಸಿ, ಅಧ್ಯಾಪಕರಾದಚೈತ್ರಎನ್ ಕೆ ನಿರೂಪಿಸಿ, ಅನ್ನಪೂರ್ಣವಂದಿಸಿದರು.