ರಾಮ ನಾಮ ಸ್ಮರಣೆಯಿಂದ ಬುದ್ಧಿಶಕ್ತಿ ಚುರುಕಾಗುತ್ತದೆ, ಆತ್ಮಸ್ಥೆöÊರ್ಯ ಜೊತೆಗೆ ಮನೋಬಲವು ವೃದ್ಧಿಸುತ್ತದೆ. ದೈಹಿಕ ಶಕ್ತಿ ಹಾಗೂ ಮಾನಸಿಕ ಶಕ್ತಿಯನ್ನೂ ನೀಡುತ್ತದೆ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು.
ಅವರು ಡಿ.26 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದ ವ್ಯಾಸ ಧ್ಯಾನ ಮಂದಿರದಲ್ಲಿ ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಶ್ರೀ ವಿದ್ಯಾ ಗಣಪತಿ ಪ್ರತಿಷ್ಠೆ ಹಾಗೂ 13 ಕೋಟಿ ರಾಮ ನಾಮ ತಾರಕ ಜಪಯಜ್ಞದ ಅಂಗವಾಗಿ ಜಪಮಾಲೆ ವಿತರಣೆ ಹಾಗೂ ರಾಮನಾಮ ಸ್ಮರಣೆಯ ಪಠಣಕ್ಕೆ ಚಾಲನೆ ನೀಡಿ ಮಾತನಾಡಿದರು.
ʼಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂಬ 13 ಅಕ್ಷರದ ಈ ರಾಮ ನಾಮ ಸ್ಮರಣೆಯಿಂದ ಪುಣ್ಯದ ಜೊತೆಗೆ ಧೈರ್ಯ, ವಿಶ್ವಾಸ, ನಂಬಿಕೆ, ಆತ್ಮಸ್ಥೈಯ, ಯಶಸ್ಸು ಲಭಿಸುವುದು ನಿಶ್ಚಿತ. ರಾಮನ ಆದರ್ಶಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳಬೇಕು. ಸೇತುವೆ ನಿರ್ಮಾಣದಲ್ಲಿ ಅಳಿಲು ಹೇಗೆ ಸೇವೆ ಮಾಡಿತು, ಅದೇ ರೀತಿ ರಾಮನ ಸೇವೆಯಲ್ಲಿ ನಮ್ಮನ್ನೂ ನಾವು ತೊಡಗಿಸಿಕೊಳ್ಳೋಣ ಎಂದರು. ಬಳಿಕ ರಾಮ ನಾಮತಾರಕಜಪದ ಮಹತ್ವವನ್ನು
ರಾಮನಾಮತಾರಕ ಮಂತ್ರವನ್ನು ಜಪಿಸುವ ವಿಧಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಗೆ ಶ್ರೀರಾಮ ಚಂದ್ರನ ಭಾವಚಿತ್ರ, ಜಪಮಾಲೆಯನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಶ್ರೀರಾಮ ಮಂದಿರದ ಕೃಷ್ಣಪ್ಪ ಹಾಗೂ ಸುಜಿತ್ಕೊಟ್ಟಾರಿ ಹಾಗೂ ಮುಖ್ಯಶಿಕ್ಷಕ ವಿರಾಜ್ ಕಣಂತೂರು ಉಪಸ್ಥಿತರಿದ್ದರು.